Pop Corner

 ‘ಭೈರವ’ನಾದ ಶಿವಣ್ಣ; ‘ಕೊನೆ ಪಾಠ’ದ ಮೊದಲ ನೋಟವಿದು..! 

ಶಿವರಾಜಕುಮಾರ್‌ ಹೊಸ ಸಿನೆಮಾಕ್ಕೆ ಟೈಟಲ್‌ ಫಿಕ್ಸ್‌

ಹ್ಯಾಟ್ರಿಕ್‌ ಹೀರೋ ಮುಂದಿನ ಸಿನೆಮಾ ‘ಭೈರವನ ಕೊನೆ ಪಾಠ’

‘ಭೈರವನ ಕೊನೆ ಪಾಠ’ದ ಫಸ್ಟ್‌ಲುಕ್‌ ಔಟ್‌…

ನಟ ಶಿವರಾಜಕುಮಾರ್‌ ಅಭಿನಯದ ಹೊಸ ಸಿನೆಮಾಕ್ಕೆ ‘ಭೈರವನ ಕೊನೆ ಪಾಠ’ ಎಂದು ಹೆಸರಿಟ್ಟಿರುವುದು ಅನೇಕರಿಗೆ ಗೊತ್ತಿರಬಹುದು. ಕೆಲ ದಿನಗಳ ಹಿಂದಷ್ಟೇ ಚಿತ್ರತಂಡ ‘ಭೈರವನ ಕೊನೆ ಪಾಠ’ ಸಿನೆಮಾದ ಟೈಟಲ್‌ ಅನ್ನು ಸೋಶಿಯಲ್‌ ಮೀಡಿಯಾಗಳ ಮೂಲಕ ಅಧಿಕೃತವಾಗಿ ಘೋಷಿಸಿತ್ತು. ಇದೀಗ ಚಿತ್ರತಂಡ ‘ಭೈರವನ ಕೊನೆ ಪಾಠ’ ಸಿನೆಮಾದ ಫಸ್ಟ್‌ಲುಕ್‌ ಅನ್ನು ಬಿಡುಗಡೆ ಮಾಡಿದೆ.

‘ಭೈರವನ ಕೊನೆ ಪಾಠ’ದ ಫಸ್ಟ್‌ ಲುಕ್‌ನಲ್ಲಿ ಯುದ್ಧಕ್ಕೆ ಹೊರಟು ನಿಂತ ಶಿವಣ್ಣ.!

ಕಳೆದ ಕೆಲ ತಿಂಗಳುಗಳಿಂದ ‘ಭೈರವನ ಕೊನೆ ಪಾಠ’ ಸಿನೆಮಾದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ‘ಭೈರವನ ಕೊನೆ ಪಾಠ’ ಸಿನೆಮಾದ ಟೈಟಲ್‌ ಅನೌನ್ಸ್‌ ಮಾಡಿದ್ದ ಚಿತ್ರತಂಡ, ಇದೀಗ ‘ಭೈರವನ ಕೊನೆ ಪಾಠ’ ಸಿನೆಮಾದಲ್ಲಿ ನಟ ಶಿವರಾಜಕುಮಾರ್‌ ಅವರ ಪಾತ್ರದ ಫಸ್ಟ್‌ಲುಕ್‌ ರಿಲೀಸ್‌ ಮಾಡಿದೆ.
ಇನ್ನು ಬಿಡುಗಡೆಯಾಗಿರುವ ‘ಭೈರವನ ಕೊನೆ ಪಾಠ’ ಸಿನೆಮಾದ ಫಸ್ಟ್‌ಲುಕ್‌ ಪೋಸ್ಟರ್‌ನಲ್ಲಿ ನಾಯಕ ನಟ ಶಿವರಾಜಕುಮಾರ್‌, ಯುದ್ಧಕ್ಕೆ ಹೊರಟ ಸೈನಿಕನಂತೆ ವಯಸ್ಸಾದ ವ್ಯಕ್ತಿಯ ಲುಕ್‌ ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಶತ್ರುಗಳ ನೋಟವನ್ನು ದುರ್ಬೀನು ಹಿಡಿದು ನೋಡುತ್ತಿರುವ ಲುಕ್‌ ನಲ್ಲಿ, ಗಡ್ಡ ಬಿಟ್ಟಿರುವ ಖದರ್‌ ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.

ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ ಫಸ್ಟ್‌ಲುಕ್‌

ಸದ್ಯ ಸೋಶಿಯಲ್‌ ಮೀಡಿಯಾಗಳಲ್ಲಿ ಬಿಡುಗಡೆಯಾಗಿರುವ ‘ಭೈರವನ ಕೊನೆ ಪಾಠ’ ಸಿನೆಮಾದ ಫಸ್ಟ್‌ಲುಕ್‌ ಪೋಸ್ಟರ್‌ ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ನಟ ಶಿವಣ್ಣ ಅಭಿಮಾನಿಗಳು ‘ಭೈರವನ ಕೊನೆ ಪಾಠ’ ಸಿನೆಮಾದ ಮೇಲೆ ಕುತೂಹಲ ಮಾತ್ತು ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ. ಇದೊಂದು ಡಿಫ್ರೆಂಟ್‌ ಕಥೆವುಳ್ಳ, ಶಿವಣ್ಣ ಹಿಂದೆಂದೂ ಕಾಣಿಸಿಕೊಳ್ಳದ ಅವತಾರದಲ್ಲಿ ಕಾಣಿಸಿಕೊಳ್ಳುವ ಸಿನೆಮಾವಾಗಿರಲಿದೆ ಎಂದು ಪೋಸ್ಟರ್‌ ನೋಡಿ  ಶಿವರಾಜಕುಮಾರ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಹೇಮಂತ್‌ ರಾವ್‌ – ಶಿವರಾಜಕುಮಾರ್‌ ಕಾಂಬಿನೇಶನ್‌ ಸಿನೆಮಾ… 

ಸ್ಯಾಂಡಲ್‌ ವುಡ್‌ನಲ್ಲಿ ʼಕವಲುದಾರಿʼ, ʼಗೋಧಿ ಬಣ್ಣ ಸಾಧಾರಣ ಮೈಕಟ್ಟು’, ʼಸಪ್ತಸಾಗರದಾಚೆ ಎಲ್ಲೋ (ಸೈಡ್‌ ಎ,ಬಿ)ʼ ಚಿತ್ರಗಳನ್ನು ನಿರ್ದೇಶಿಸಿ ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಹೇಮಂತ್‌ ರಾವ್‌, ಮೊದಲ ಬಾರಿಗೆ ಮಾಸ್‌ ಹೀರೋ ಶಿವಣ್ಣ ಅವರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವುದರಿಂದ ಈ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ.
ವೈಶಾಖ್‌ ಗೌಡ ಎನ್ನುವವರು ʼವಿಜೆ ಫಿಲಂಸ್‌’ ಬ್ಯಾನರ್‌  ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ವೈಶಾಖ್‌ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸೆಪ್ಟೆಂಬರ್‌ ನಂತರ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಅಂದಹಾಗೆ, ಸೌತ್‌ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಸಿನಿಮಾ. ಕನ್ನಡದ ಜೊತೆಗೆ ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಈ ಚಿತ್ರ ಮೂಡಿಬರುತ್ತಿದೆ.

‘ಭೈರವನ ಕೊನೆ ಪಾಠ’ ಬಗ್ಗೆ ನಿರ್ದೇಶಕ ಹೇಮಂತ್‌ ರಾವ್‌ ಏನಂತಾರೆ? 

ನಿರ್ದೇಶಕ ಹೇಮಂತ್ ಎಂ. ರಾವ್ ಅವರ ಸಿನೆಮಾಗಳ ಶೀರ್ಷಿಕೆಗಳು ಯಾವಾಗಲೂ ವಿಶಿಷ್ಟವಾಗಿರುತ್ತವೆ. ಇದರ ಬಗ್ಗೆ ಪ್ರಶ್ನಿಸಿದಾಗ ಅವರು, ʼನಮ್ಮ ಆಡುಭಾಷೆಗೆ ಹತ್ತಿರವಾದ ಶೀರ್ಷಿಕೆಗಳು ನನಗೆ ಇಷ್ಟವಾಗುತ್ತವೆ. ಈ ಹಿಂದೆ ಕನ್ನಡ ಸಿನೆಮಾ ಶೀರ್ಷಿಕೆಗಳು ಕೇಳಲಿಕ್ಕೂ ಮಧುರವಾಗಿದ್ದು ಕುತೂಹಲ ಕೆರಳಿಸುವಂತೆ ಇರುತ್ತಿದ್ದವು. ನನ್ನ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ಸಪ್ತ ಸಾಗರದಾಚೆ ಎಲ್ಲೋ’ ಸಿನೆಮಾ ಶೀರ್ಷಿಕೆಗಳು ಸಾಕಷ್ಟು ಜನ ಮೆಚ್ಚುಗೆಗೆ ಪಾತ್ರವಾದವು. ‘ಭೈರವನ ಕೊನೆ ಪಾಠ’ ಕೂಡಾ ಆ ಸಾಲಿಗೆ ಸೇರಲಿದೆ. ಕನ್ನಡ ಸಿನೆಮಾ ಜಗತ್ತಿನ ವಿಶಿಷ್ಟ ಶೀರ್ಷಿಕೆಗಳ ಪರಂಪರೆಯನ್ನು ಮುಂದಿನ ತಲೆಮಾರುಗಳಿಗೂ ತಲುಪಿಸುವ ಉದ್ದೇಶ ನಮ್ಮದು. ಅದರಲ್ಲೂ ನಾನು ಬಹಳವಾಗಿ ಇಷ್ಟಪಡುವ ಶಿವಣ್ಣ ಅವರ ಸಿನೆಮಾ ಶೀರ್ಷಿಕೆಗಳ ಸೌಂದರ್ಯವನ್ನು ಸದಾ ಕಾಲ ನೆನಪಿರುವಂತೆ ಮಾಡುವುದು ನನ್ನ ಬಯಕೆ. ಈ ಚಿತ್ರದಲ್ಲಿ ಭೈರವನೇ ಕೇಂದ್ರ ಪಾತ್ರವಾಗಿದ್ದು, ನಮ್ಮ ಶೀರ್ಷಿಕೆ ಅಚ್ಚುಕಟ್ಟಾಗಿ ಹೊಂದುತ್ತದೆ. ಅವನು ಮಾಡುವ ಪಾಠ ಯಾವುದು? ಅದನ್ನು ಕೊನೆ ಪಾಠ ಅಂದಿರೋದು ಯಾಕೆ ಅನ್ನುವುದೇ ಇದರ ಮುಖ್ಯ ತಿರುಳು. ನಮ್ಮ ಶೀರ್ಷಿಕೆ ವೀಕ್ಷಕರಲ್ಲಿ ಈ ಪ್ರಶ್ನೆಗಳನ್ನು ಯಶಸ್ವಿಯಾಗಿ ಹುಟ್ಟುಹಾಕುತ್ತದೆ ಅನ್ನುವುದು ನಮ್ಮ ನಂಬಿಕೆʼ ಎಂದು ‘ಭೈರವನ ಕೊನೆ ಪಾಠ’ ಸಿನೆಮಾದ ಟೈಟಲ್‌ ಮಾತ್ತು ಕಥಾಹಂದರದ ಬಗ್ಗೆ ವಿವರಣೆ ನೀಡುತ್ತಾರೆ.

 

 

 

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!